ಕೊಚ್ಚಿ : ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಮಲಯಾಳಂ ಚಿತ್ರನಟ ಸಲೀಂ ಕುಮಾರ್ ನಿನ್ನೆ ರಾತ್ರಿ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು, ಕೆಲವು ಸಮಯದಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು. ಕೊಚ್ಚಿಯ ಅಮ್ರತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ನ್ಯುಮೋನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದಾಗ. ಹೃದಯಾಘಾತದಿಂದ ರಾತ್ರಿ 10:43ಕ್ಕೆ ಅವರು ಕೊನೆಯುಸಿರೆಳೆದರು, ಅವರ ನಿಧನದ ಸುದ್ದಿ ಇಡೀ ಭಾರತೀಯ ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ಆಘಾತಕ್ಕೀಡು ಮಾಡಿದೆ.

ಅವರ ಕುಟುಂಬದವರ ಪ್ರಕಾರ ಕೆಲವು ವರ್ಷಗಳ ಹಿಂದೆ ಯಕೃತ್ತು ಕಸಿಗೆ ಒಳಗಾಗಿದ್ದ ನಟನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು, ತಕ್ಷಣ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಮಲಯಾಳಂ ಚಿತ್ರರಂಗದಲ್ಲಿ ಪ್ರಸಿದ್ಧ ನಟರಾಗಿದ್ದ ಸಲೀಂ ಕುಮಾರ್, 1990 ರ ದಶಕದ ಉತ್ತರಾರ್ಧದಲ್ಲಿ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸುವ ಮೊದಲು ರಂಗಭೂಮಿ, ಮಿಮಿಕ್ರಿ ಮತ್ತು ಹಾಸ್ಯದ ಮೂಲಕ ಮನ್ನಣೆ ಪಡೆದರು.

ಸಲೀಂ ಕುಮಾರ್ ಅವರು 1997 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಅವರ ಹಾಸ್ಯ ಅಭಿನಯವು 2000 ರ ದಶಕದಲ್ಲಿ ಅವರಿಗೆ ವ್ಯಾಪಕ ಜನಪ್ರಿಯತೆಯನ್ನು ಗಳಿಸಿಕೊಟ್ಟಿತು.ಲಾಲ್ ಜೋಸ್ ಅವರ ಅಚಾನುರಂಗಥಾ ವೀಡು (2006) ಚಿತ್ರದ ಅಭಿನಯಕ್ಕಾಗಿ ಸಲೀಂ ಕುಮಾರ್ ಎರಡನೇ ಅತ್ಯುತ್ತಮ ನಟ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು, ನಂತರ ಸಲೀಂ ಅಹಮದ್ ಅವರ 2011ರ ಆದಮಿಂತೆ ಮಕನ್ ಅಬು ಚಿತ್ರದಲ್ಲಿನ ಪ್ರಮುಖ ಪಾತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಎರಡನ್ನೂ ಪಡೆದರು, ಇದು 2011 ರಲ್ಲಿ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವಾಗಿತ್ತು. ಆ ನಿರ್ಣಾಯಕ ಪಾತ್ರವು ಅವರ 22 ವರ್ಷಗಳ ನಟನಾ ವೃತ್ತಿಜೀವನದಲ್ಲಿ ಹಾಸ್ಯದಿಂದ ಗಂಭೀರ ನಟನೆಗೆ ಪರಿವರ್ತನೆಯ ಪ್ರದರ್ಶನವಾಗಿದೆ, ಅವರು ಸುಮಾರು 320 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿಯಿಸಿದ್ದಾರೆ. ಅವರ 2017 ರ ಚಲನಚಿತ್ರ ಕರುಥ ಜೂಥನ್ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ‘ಕಂಪಾರ್ಟ್ಮೆಂಟ್’ ಮತ್ತು ‘ದೈವೈಮೆ ಕೈತೋಳಮ್ ಕೆ. ಕುಮಾರಕನಂ’ ಚಿತ್ರಗಳು ಸಲೀಂ ಕುಮಾರ್ ನಿರ್ದೇಶನದ ಚಲನಚಿತ್ರಗಳಾಗಿವೆ.

ಸಲೀಂ ಕುಮಾರ್ ಅವರು ಪತ್ನಿ ಸುನೀತಾ ಮತ್ತು ಅವರ ಇಬ್ಬರು ಪುತ್ರರಾದ ಚಂದು ಮತ್ತು ಆರೋಮಲ್ ಅವರನ್ನು ಅಗಲಿದ್ದಾರೆ. ಅವರ ಹಿರಿಯ ಮಗ ಚಂದು ಸಲೀಂ ಕುಮಾರ್ ಕೂಡ ನಟನಾ ವೃತ್ತಿಯನ್ನು ಅನುಸರಿಸುತ್ತಿದ್ದಾರೆ.
ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ನಟನಿಗೆ ಸಂತಾಪ ಸೂಚಿಸುತ್ತಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ, “ಸಲೀಂ ಕುಮಾರ್ ಉತ್ತರ ಪರವೂರಿನ ಹೆಮ್ಮೆಯಾಗಿದ್ದರು. ಬಡತನ ಮತ್ತು ಕಷ್ಟಗಳನ್ನು ಎದುರಿಸಿದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತೀಯ ಚಿತ್ರರಂಗದ ಉತ್ತುಂಗಕ್ಕೇರಿದರು. ಅವರು ತಮ್ಮ ಕೆಲಸದ ಮೂಲಕ ಆಸ್ಕರ್ ನಾಮನಿರ್ದೇಶನ ಹಂತವನ್ನು ತಲುಪಿದ ಅಪರೂಪದ ಪ್ರತಿಭೆ.”ಎಂದು ಹೇಳಿದರು.


