ದಮ್ಮಾಮ್ : ಸೌದಿ ಬಿಲ್ಲವಾಸ್ ದಮ್ಮಾಮ್ , ಸೌದಿ ಅರೇಬಿಯ ಇದರ ವಾರ್ಷಿಕ ಮಹಾಸಭೆಯು ಶುಕ್ರವಾರಜುಬೈಲ್ ನ ಪುಳಿರೆಸ್ಟೊರೇಂಟ್ ನ ಪ್ಲೆಕ್ಸೊನ್ ಅಡಿಟೋರಿಯಂನಲ್ಲಿ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಖ್ಯಾತ ಯಕ್ಷಗಾನ ಭಾಗವತರಾದ ಶ್ರೀ ರೋಶನ್ ಕೋಟ್ಯಾನ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ವೇದಿಕೆಯಲ್ಲಿದ್ದ
ಎಲ್ಲಾ ಗಣ್ಯರು ದೀಪ ಬೆಳಗಿಸಿ ಸಭೆ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಸಂಘದ ಪ್ರಧಾನ ಕಾರ್ಯದರ್ಶಿ ವರದಿ ವಾಚಿಸಿದರು, ಖಜಾಂಚಿ ಶ್ರೀ ಹರೀಶ್ ಪೂಜಾರಿ ತೋನ್ಸೆ ಲೆಕ್ಕಪತ್ರ ಮಂಡಿಸಿದರು ನಂತರ ವರದಿ ಹಾಗು ಲೆಕ್ಕಪತ್ರ ಮೇಲೆ ಚರ್ಚೆ, ಪ್ರಶ್ನೋತ್ತರ ನಡೆಯಿತು, ನಂತರ ಸಂಘದ ಹಿರಿಯರು ಮತ್ತು ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಪೂಜಾರಿ ಯವರು ನೂತನ ಪದಾಧಿಕಾರಿ ಹಾಗು ಕಾರ್ಯಕಾರಿ ಸಮಿತಿಯನ್ನು ರಚಿಸುವ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಿದರಲ್ಲದೆ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶುಭ ಕೋರಿದರು, ವೇದಿಕೆಯಲ್ಲಿದ್ದ ಇನ್ನೋರ್ವ ಗೌರವಾಧ್ಯಕ್ಷರಾದ ಯುವ ಉದ್ಯಮಿ ಶ್ರೀ ಯೋಗೇಶ್ ಪೂಜಾರಿ ಕಟಪಾಡಿ ಸಭೆಯನ್ನು ಉದ್ದೇಶಿಸಿ ಶುಭಕೋರಿ ಮಾತನಾಡಿ ನೂತನ ಸಮಿತಿಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು.

ಅಧ್ಯಕ್ಷರು 2026-27 ವರ್ಷದ ಕಾರ್ಯಕ್ರಮ ಯೋಜನೆಗಳ ಬಗ್ಗೆ ವಿವರವಾಗಿ ಮಾತನಾಡಿದ್ದಲ್ಲದೆ ಸದಸ್ಯರಿಗೆ ಸಂಘದ ಮಹತ್ವ ಮತ್ತು ಕಾರ್ಯಕ್ರಮದ ಬಗ್ಗೆ ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರೀಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಸಭೆಯ ನಂತರ ಸದಸ್ಯರಿಂದ ಹಾಗು ಮಕ್ಕಳಿಂದ ಹಾಡು , ನ್ರತ್ಯ ಸಾಂಸ್ಕತಿಕ ಕಾರ್ಯಕ್ರಮದ ನಡುವೆ ರಾಫಲ್ ಟಿಕೆಟ್ ಡ್ರಾ ವನ್ನು ಶ್ರೀ ಮನೋಹರ ಅಮೀನ್ ಮತ್ತು ಶ್ರೀ ದಕ್ಷಯ್ ಮಾಡಿದರು.
ಸಭೆಯ ಪ್ರಾರಂಭದಿಂದ ಕೊನೆಯವರೆಗೆ ಸಂಘದ ಕಾರ್ಯ ಚಟುವಟಿಕೆಗಳನ್ನು ಪ್ರೊಜೆಕ್ಟರ್ ಮೂಲಕ ಶ್ರೀ ಪ್ರವೀಣ್ ಪೂಜಾರಿ ತೊರಿಸಿದರು ಕೊನೆಗೆ ಸಹ ಕಾರ್ಯದರ್ಶಿ ಶ್ರೀ ರಾಜೇಶ್ ತೋನ್ಸೆ ವಂದಿಸಿದರು, ಕಾರ್ಯಕ್ರಮವನ್ನು ಸಂಘಟನ ಕಾರ್ಯದರ್ಶಿ ಹಾಗು ಸಂಯೋಜಕಿ ಶ್ರೀಮತಿ ಚೇತನ ಪೂಜಾರಿ ನಿರ್ವಹಿಸಿದರು.

ಗೌರವ ಅಧ್ಯಕ್ಷರು: ಶ್ರೀ ಸದಾಶಿವ ಪೂಜಾರಿ ಮತ್ತು ಶ್ರೀ ಯೋಗೇಶ್ ಪೂಜಾರಿ ಕಟಪಾಡಿ .
ಅಧ್ಯಕ್ಷರು : ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್.
ಉಪಾಧ್ಯಕ್ಷರು : ಶ್ರೀ ವಿಶ್ವನಾಥ್ ಸುವರ್ಣ ಮತ್ತು ಶ್ರೀ ಸುಂದರದಾಸ್ ಪೂಜಾರಿ.
ಪ್ರಧಾನ ಕಾರ್ಯದರ್ಶಿ : ಶ್ರೀ ರೋಶನ್ ಕೋಟ್ಯನ್.
ಸಹ ಕಾರ್ಯದರ್ಶಿ : ಶ್ರೀ ರಾಜೇಶ್ ತೋನ್ಸೆ ಹಾಗು ಶ್ರೀ ಮನೋಹರ ಅಮೀನ್.
ಖಜಾಂಚಿ : ಹರೀಶ್ ಪೂಜಾರಿ ತೋನ್ಸೆ.
**ಸಹ ಖಜಾಂಚಿ **: ಶ್ರೀಮತಿ ಪ್ರೀತ ಎ ಬಂಗೇರ.
ಮಖ್ಯ ಸಂಯೋಜಕರು: ಶ್ರೀಮತಿ ಚೇತನ ಎಸ್ ಪೂಜಾರಿ.
ಸಹ ಸಂಯೋಜಕರು: ಶ್ರೀ ಅಜೀತ್ ಸನಿಲ್ ಕಟಪಾಡಿ.
**ಸಾಂಸ್ಕ್ರತಿಕ ಕಾರ್ಯದರ್ಶಿ **: ಶ್ರೀ ಯಶವಂತ್ ಸನಿಲ್ .
*ಸಹ ಸಾಂಸ್ಕ್ರತಿಕ ಕಾರ್ಯದರ್ಶಿಗಳು*: ಶ್ರೀ ಸಂದೀಪ್ ಬಜಾಲ್ ಹಾಗು ಶ್ರೀ ದಕ್ಷಯ್ ಪೂಜಾರಿ.
ಕ್ರೀಡಾ ಕಾರ್ಯದರ್ಶಿ: ದೇವಾಂಗ್ ಸುವರ್ಣ.
ಸಹ ಕ್ರೀಡಾ ಕಾರ್ಯದರ್ಶಿಗಳು : ಶ್ರೀ ಗಣೇಶ್ ಪಾಲನ್ ಮತ್ತು ಶ್ರೀ ಪ್ರಮೋದ್ ಪೂಜಾರಿ.
ಮಾಧ್ಯಮ ಸಮಿತಿ ಮುಖ್ಯಸ್ಥರು : ಶ್ರೀ ಪುಷ್ಪರಾಜ್ ಪೂಜಾರಿ ಗಡಿಯಾರ್.
ಕಾರ್ಯಕಾರಿ ಸಮಿತಿ ಸದಸ್ಯರು : ಶ್ರೀ ಅರುಣ್ ಬಂಗೇರ, ಶ್ರೀ ಉಮೇಶ್ ಬಿಲ್ಲವ, ಶ್ರೀ ಪ್ರವೀಣ್ ಪೂಜಾರಿ, ಶ್ರೀಮತಿ ವಿಧ್ಯಾಶ್ರೀ ತೋನ್ಸೆ, ಶ್ರೀಮತಿ ಭಾಗ್ಯಜ್ಯೋತಿ ತೋನ್ಸೆ, ಶ್ರೀಮತಿ ಸುನೀತ ಸುವರ್ಣ, ಶ್ರೀಮತಿ ಸುಚಿತ್ರ ಬಜಾಲ್ , ಶ್ರೀಮತಿ ದೀಕ್ಷಾ ಕೋಟ್ಯಾನ್, ಶ್ರೀಮತಿ ದಿವ್ಯ ಅಮೀನ್, ಕುಮಾರಿ ಸುಹಾಸಿನಿ ಬಿಲ್ಲವ., ವೇದಾವತಿ ಪೂಜಾರಿ.
*ಮಾರ್ಗದರ್ಶಿ ಮಂಡಲಿ *: ಶ್ರೀ ಸುದರ್ಶನ್ ಡಿ ಪೂಜಾರಿ, ಶ್ರೀ ಶೇಖರ್ ಕೋಟ್ಯಾನ್, ಶ್ರೀ ಆನಂದ ಪೂಜಾರಿ, ಶ್ರೀ ಜಯ ಸುವರ್ಣ.
ಸಾಮಾಜಿಕ ಮಾಧ್ಯಮ ಸಮಿತಿ: ಶ್ರೀ ಪ್ರವೀಣ್ ಪೂಜಾರಿ, ಶ್ರೀಮತಿ ಸುನೀತ ಸುವರ್ಣ, ಶ್ರೀ ಪ್ರಮೋದ್ ಪೂಜಾರಿ, ಶ್ರೀ ಅಕ್ಷಾನ್ ಪಾಲನ್.
ಸಾಂಸ್ಕ್ರತಿಕ ಸಮಿತಿ:: ಶ್ರೀ ಅಂಕಿತ್ ಪೂಜಾರಿ ಎರ್ಮಾಲ್, ಸಂದೀಪ್ ಸಾಲ್ಯನ್, ಅವನೀತ್ ಪೂಜಾರಿ, ರಾಜೇಶ್ ಪಡುಬಿದ್ರೆ, ಸುರೇಶ್ ಸುವರ್ಣ, ಶ್ರುಜನ್ ಪೂಜಾರಿ, ಕುಮಾರಿ ನಮಿತ ಸಾಲ್ಯನ್.
ಕ್ರೀಡಾ ಸಮಿತಿ : ಶ್ರೀ ಸಂತೋಷ್ ಜೆ ಡಿ ಪೂಜಾರಿ, ಪ್ರತೀಕ್ ಪೂಜಾರಿ, ಮಹೇಂದ್ರ ಬಿಲ್ಲವ, ದೀಕ್ಷೀತ್ ಕೋಟ್ಯಾನ್, ಶೀಮತಿ ದೀಕ್ಷ ಆರ್ ಕೋಟ್ಯಾನ್, ಕುಮಾರಿ ಸುಹಾಸಿನಿ ಬಿಲ್ಲವ.
ಆಹಾರ ವ್ಯವಸ್ಥೆ ಸಮಿತಿ: ಶ್ರೀಮತಿ ಮಮತ ಪೂಜಾರಿ, ಶ್ರೀಮತಿ ವೇದಾವತಿ ಪೂಜಾರಿ, ಶ್ರೀ ಆನಂದ ಪೂಜಾರಿ, ಶ್ರೀ ವಿಶ್ವನಾಥ್ ಸುವರ್ಣ ಮತ್ತು ಶ್ರೀ ಸುಂದರದಾಸ್ ಪೂಜಾರಿ, ಶ್ರೀ ಸದಾಶಿವ ಪೂಜಾರಿ.


