ಮುಂಬೈ: ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅವರ ನಿಗೂಢ ಸಾವಿಗೆ ಮೂರು ದಶಕಗಳ ನಂತರವೂ ತೆರೆದುಕೊಳ್ಳದ ರಹಸ್ಯವೊಂದು ಪ್ಯಾರಾನಾರ್ಮಲ್ ತನಿಖೆಯ ಮೂಲಕ ಹೊರಬಿದ್ದಿದೆ. ಹೌದು, ಅತೀಂದ್ರಿಯ ಸಂಶೋಧಕ ಸೌರಭ್ ಪೂನಿಯಾ ಅವರು ಶ್ರೀದೇವಿ ಆತ್ಮವನ್ನು ಮಾತನಾಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಶ್ರೀದೇವಿ ಅವರ ಸಾವು ಕೇವಲ ಅಪಘಾತವಲ್ಲ, ಅದು ಕೊಲೆ. ಕೊಲೆ ಮಾಡಿದ ವ್ಯಕ್ತಿ ಬೋನಿ ಕಪೂರ್ ಎಂದು ಆತ್ಮವೇ ಹೇಳಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದಾರೆ
ಫೆಬ್ರವರಿ 24, 2018 ರಂದು ದುಬೈನ ಜುಮೈರಾ ಎಮಿರೇಟ್ಸ್ ಟವರ್ಸ್ ಹೋಟೆಲ್ನ ಕೋಣೆಯಲ್ಲಿ ಶ್ರೀದೇವಿ ಅವರ ಮೃತದೇಹ ಪತ್ತೆಯಾಯಿತು. ಅವರು ತಮ್ಮ ಸಂಬಂಧಿಕರ ಮದುವೆ ಸಮಾರಂಭಕ್ಕಾಗಿ ದುಬೈಗೆ ತೆರಳಿದ್ದರು. ಸ್ನಾನದ ಟಬ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಆರಂಭಿಕ ವರದಿಗಳ ಪ್ರಕಾರ, ಅವರು ಮದ್ಯಪಾನ ಮಾಡಿದ್ದರು, ನಂತರ ಟಬ್ನಲ್ಲಿ ಜಾರಿ ಬಿದ್ದು ನೀರು ತುಂಬಿಕೊಂಡು ಮುಳುಗಿ ಸಾವನ್ನಪ್ಪಿದ್ದರು ಎನ್ನಲಾಗಿತ್ತು. ದುಬೈ ಪೊಲೀಸರ ಅಧಿಕೃತ ತನಿಖೆ ಇದನ್ನೇ ದೃಢಪಡಿಸಿತ್ತು. ಆದರೆ ಅನೇಕ ಅಭಿಮಾನಿಗಳು ಮತ್ತು ಕುಟುಂಬಸ್ಥರು ಇದೊಂದು ಕೊಲೆ ಎಂದು ಅನುಮಾನಿಸಿದ್ದರು.

ಸೌರಭ್ ಪೂನಿಯಾ ಎಂಬಾತ ತಾನು ಅತೀಂದ್ರಿಯ ತನಿಖಾಕಾರಿ ಎಂದು ಹೇಳಿಕೊಂಡಿದ್ದು, ಅವರು ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶ್ರೀದೇವಿ ಆತ್ಮದೊಂದಿಗೆ ಮಾತನಾಡಿಸಿರುವುದಾಗಿ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಆ ವಿಡಿಯೊದಲ್ಲಿ ಅವರು ಹೇಳುವ ಪ್ರಕಾರ, ಆರಂಭದಲ್ಲಿ ಶ್ರೀದೇವಿ ಆತ್ಮ ಏನನ್ನೂ ಹೇಳಲು ನಿರಾಕರಿಸಿತಂತೆ. ನಂತರ ಅವರು “ನಿಮಗೆ ಯಾರು ಹೊಡೆದು ಬಾತ್ಟಬ್ನಲ್ಲಿ ಮುಳುಗಿಸಿದ್ದಾರೆ?” ಎಂದು ಪದೇ ಪದೇ ಕೇಳಿದಾಗ, ಆತ್ಮವು “ಬೋನಿ ಕಪೂರ್” ಎಂದು ಸ್ಪಷ್ಟವಾಗಿ ಹೇಳಿದೆಯಂತೆ. ಪೂನಿಯಾ, “ನಾನು ಇದನ್ನೆಲ್ಲ ಹೇಳಿದರೆ ಯಾರೂ ನಂಬೋದಿಲ್ಲ. ಆದರೆ ನನ್ನ ಬಳಿ ಆಡಿಯೋ ರೆಕಾರ್ಡಿಂಗ್ ಕೂಡ ಇದೆ” ಎಂದು ವಾದಿಸುತ್ತಾರೆ. ಅವರ ಪ್ರಕಾರ, ಶ್ರೀದೇವಿ ಸಾವಿನ ಹಿಂದೆ ಅವರ ಪತಿ ಬೋನಿ ಕಪೂರ್ ಇದ್ದಾರೆ ಎಂದು ಹೇಳಲಾಗಿದೆ..

ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವರು ಪೂನಿಯಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೆ, ಇನ್ನೂ ಕೆಲವರು ಇದೊಂದು ಗಮನ ಸೆಳೆಯುವ ತಂತ್ರ ಎಂದು ತಳ್ಳಿಹಾಕುತ್ತಿದ್ದಾರೆ. ಬೋನಿ ಕಪೂರ್ ಅಥವಾ ಕಪೂರ್ ಕುಟುಂಬದ ಯಾರೂ ಇದುವರೆಗೆ ಈ ಆರೋಪಕ್ಕೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ದುಬೈ ಪೊಲೀಸರ ತನಿಖೆ ಅಂತಿಮವಾಗಿ ಸಾವು ಅಪಘಾತ ಎಂದು ತೀರ್ಮಾನಿಸಿತ್ತು. ಆದರೆ ಅಭಿಮಾನಿಗಳಲ್ಲಿ ಇಂದಿಗೂ ಅನೇಕ ಪ್ರಶ್ನೆಗಳಿವೆ, ಶ್ರೀದೇವಿ ಅಷ್ಟೊಂದು ಪ್ರಬಲ ವ್ಯಕ್ತಿತ್ವದ ಮಹಿಳೆ ಹೇಗೆ ಕೇವಲ ಬಾತ್ಟಬ್ನಲ್ಲಿ ಪ್ರಜ್ಞೆ ತಪ್ಪಿ ಬೀಳಬಹುದು? ಕೋಣೆಯಲ್ಲಿ ಬೇರೆ ಯಾರಿದ್ದರು? ಮದ್ಯದ ಪ್ರಮಾಣ ಎಷ್ಟಿತ್ತು? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

