ಮಂಗಳೂರು : ಮುಡಿಪು ಭಾರತಿ ವಿದ್ಯಾ ಸಂಸ್ಥೆಯಲ್ಲಿ ಪಿ.ವಿ.ಪ್ರದೀಪ್ ಕುಮಾರ್ ಸಾರತ್ಯದ ಕಥಾಬಿಂಧು ಸಾಹಿತ್ಯ ವೇದಿಕೆ ಮತ್ತು ಕಥಾಬಿಂಧು ಪ್ರಕಾಶನದ ನೇತೃತ್ವದಲ್ಲಿ 16ರಂದು ನಡೆದ ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ, ಧರ್ಮದರ್ಶಿ ಮಾಜಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರ್ ಅದ್ಯಕ್ಷತೆಯಲ್ಲಿ ನೆರವೇರಿತು.
ಈ ಸಂದರ್ಭ ದಲ್ಲಿ ಗಡಿನಾಡು ಕಾಸರಗೋಡಿನ ಖ್ಯಾತ ಕನ್ನಡ ಸಂಸ್ಥೆ ರೂವಾರಿಗಳಾದ ಡಾ.ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗಳಿಗೆ “ಚೈತನ್ಯ ಶ್ರೀ ” ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಧರ್ಮದರ್ಶಿ ಹರಿಕೃಷ್ಣ ಪುನಃರೂರು,ಕಥಾಬಿಂದು ಪಿ.ವಿ.ಪ್ರದೀಪ್ ಕುಮಾರ್, ಡಾ. ಕೊಲಚಪ್ಪೆ ಗೋವಿಂದ ಭಟ್, ಹಿರಿಯ ಸಾಹಿತಿ ಕೆ.ವಿ ಲಕ್ಷ್ಮಣ ಮೂರ್ತಿ, ಶ್ರೀ ಸುಬ್ರಹ್ಮಣ್ಯ ಭಟ್ ಕೊಡಕ್ಕಲ್ ಮುಂತಾದವರಿದ್ದರು.

