ಕಾಸರಗೋಡು : ಕಾಸರಗೋಡು ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗಲಿರುವ 71 ನೇ ವರುಷದ ಸಾರ್ವಜನಿಕ. ಶ್ರೀ ಗಣೇಶೋತ್ಸವ ಪ್ರಯುಕ್ತ ಕಬಡ್ಡಿ ಪಂದ್ಯಾಟವನ್ನು ಹಿರಿಯ ಕ್ರೀಡಾ ಪಟುಗಳಾದ ಶ್ರೀ ಕಮಲಾಕ್ಷ ಹಾಗೂ ಶ್ರೀ ಕೃಷ್ಣ ನಾಯರ್ ಬೀರಂತಬೈಲ್ ಇವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಸತೀಶ್ ಕಾಮತ್, ಪ್ರಧಾನ ಕಾರ್ಯದರ್ಶಿ ಆಕಾಶ ಪ್ರಮೋದ್, ಉಪಾಧ್ಯಕ್ಷ ರವಿ ಕೇಳುಗುಡ್ಡೆ, ಕೋಶಾಧಿಕಾರಿ ಉಪೇಂದ್ರ ಆಚಾರ್ಯ, ಕಾರ್ಯದರ್ಶಿ ರವಿ ಕೇಸರಿ, ಗಣೇಶೋತ್ಸವ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ, ಕಮಲಾಕ್ಷ ಕೆ.ಎನ್, ಉಮೇಶ್ ನೆಲ್ಲಿಕುಂಜೆ, ಹಿರಿಯ ಸದಸ್ಯರಾದ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ, ಅರುಣ್ ಕುಮಾರ್ ಶೆಟ್ಟಿ, ಕಬಡ್ಡಿ ತೀರ್ಪುಗಾರರಾದ ಶ್ರೀ ಗಣೇಶ್ ರೆಫ್ರಿ, ಶ್ರೀ ಗಣೇಶ್ ಕುಂಬಳೆ ಹಾಗೂ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.
ಮಂಗಳೂರು ಮಿತ್ರ

