ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಪಾಕ್ ಪರ 2000 ರಿಂದ 2010 ರವರೆಗೆ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ಇತ್ತೀಚಿಗೆ ಡ್ಯಾನಿಶ್ ಭಾರತವನ್ನು ನನ್ನ ಮಾತೃಭೂಮಿ, ಪಾಕ್ ನನ್ನ ಜನ್ಮಭೂಮಿ ಎಂದು ಹೇಳಿಕೊಂಡಿದ್ದಾರೆ.

ಅನೇಕ ಜನರು ನನ್ನನ್ನು ಪ್ರಶ್ನಿಸುವುದನ್ನು ನಾನು ನೋಡಿದ್ದೇನೆ, ನಾನು ಪಾಕಿಸ್ತಾನದ ಬಗ್ಗೆ ಏಕೆ ಮಾತನಾಡುವುದಿಲ್ಲ, ಭಾರತದ ಆಂತರಿಕ ವಿಷಯಗಳ ಬಗ್ಗೆ ನಾನು ಏಕೆ ಪ್ರತಿಕ್ರಿಯಿಸುತ್ತೇನೆ ಎಂದು ಕೇಳುತ್ತಿದ್ದಾರೆ. ಮತ್ತು ಕೆಲವರು ನಾನು ಭಾರತೀಯ ಪೌರತ್ವಕ್ಕಾಗಿ ಇದನ್ನೆಲ್ಲಾ ಮಾಡುತ್ತೇನೆ ಎಂದು ಆರೋಪಿಸುತ್ತಿದ್ದಾರೆ.
ಆದ್ರೆ ನನಗೆ ಭಾರತದ ಪೌರತ್ವ ಪಡೆಯುವ ಯಾವ ಆಲೋಚನೆಯೂ ಇಲ್ಲ. ನನ್ನಂತವರಿಗೆ ಅಂತಹ ಯೋಚನೆ ಬಂದರೆ ಸಿಎಎ ಈಗಾಗಲೇ ಜಾರಿಯಲ್ಲಿದೆ. ಪಾಕಿಸ್ತಾನ ನನ್ನ ಜನ್ಮಭೂಮಿಯಾಗಿರಬಹುದು ಆದರೆ ಭಾರತ ನನ್ನ ಪೂರ್ವಜರ ಭೂಮಿ, ನನ್ನ ಮಾತೃಭೂಮಿ. ನನ್ನ ಪಾಲಿಗೆ ಭಾರತ ಒಂದು ದೇವಾಲಯದಂತೆ ಎಂದು ಕೊಂಡಾಡಿದ್ದಾರೆ.

ಪಾಕಿಸ್ತಾನ ಜನರಿಂದ ಪಡೆದ ಪ್ರೀತಿಗೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದರು ,ಆದರೆ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ “ಆಳವಾದ ತಾರತಮ್ಯ” ಮತ್ತು “ಬಲವಂತದ ಮತಾಂತರದ ಪ್ರಯತ್ನಗಳನ್ನು” ಎದುರಿಸಿದ್ದನ್ನು ಸಹ ನೆನಪಿಸಿಕೊಂಡರು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ತಾರತಮ್ಯವನ್ನು ಪರಿಹರಿಸಲು ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ಡ್ಯಾನಿಶ್ ಕನೇರಿಯಾ ಹೇಳಿದರು.ತಾರತಮ್ಯದಿಂದಾಗಿ ತಮ್ಮ ವೃತ್ತಿಜೀವನ ನಾಶವಾಯಿತು ಮತ್ತು ಪಾಕಿಸ್ತಾನದಲ್ಲಿ ಸಮಾನ ಗೌರವವನ್ನು ನಿರಾಕರಿಸಲಾಗಿದೆ ಎಂದರು ಪಾಕಿಸ್ತಾನದಲ್ಲಿ ನನಗೆ ಸಿಗಬೇಕಾದ ಗೌರವ ಮತ್ತು ಸಮಾನ ಮೌಲ್ಯ ಸಿಗಲಿಲ್ಲ. ಈ ತಾರತಮ್ಯದಿಂದಾಗಿ, ನಾನು ಇಂದು ಅಮೆರಿಕದಲ್ಲಿದ್ದೇನೆ. ಜಾಗೃತಿ ಮೂಡಿಸಲು ಮತ್ತು ಕ್ರಮ ಕೈಗೊಳ್ಳಲು ನಾವು ಎಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ ಎಂಬುದನ್ನು ಅಮೆರಿಕಕ್ಕೆ ತಿಳಿಸಲು ನಾವು ಮಾತನಾಡಿದ್ದೇವೆ” ಎಂದು ಡ್ಯಾನಿಶ್ ಕನೇರಿಯಾ ಹೇಳಿದರು.

ಪಾಕಿಸ್ತಾನ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿರುವ ಕನೇರಿಯಾ, ಅನಿಲ್ ದಳಪತ್ ನಂತರ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಕ್ರಿಕೆಟಿಗ.
“ನಾನು ನನ್ನ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೆ ಮತ್ತು ಕೌಂಟಿ ಕ್ರಿಕೆಟ್ ಕೂಡ ಆಡುತ್ತಿದ್ದೆ. ಇಂಜಮಾಮ್-ಉಲ್-ಹಕ್ ನನಗೆ ತುಂಬಾ ಬೆಂಬಲ ನೀಡಿದರು ಮತ್ತು ಹಾಗೆ ಮಾಡಿದ ಏಕೈಕ ನಾಯಕ ಅವರು. ಅವರ ಜೊತೆಗೆ ಶೋಯೆಬ್ ಅಖ್ತರ್ ಕೂಡಾ ನನಗೆ ತುಂಬಾ ಪ್ರೋತ್ಸಾಹ ನೀಡಿದರು. ಶಾಹಿದ್ ಅಫ್ರಿದಿ ಮತ್ತು ಇತರ ಅನೇಕ ಪಾಕಿಸ್ತಾನಿ ಆಟಗಾರರು ನನ್ನನ್ನು ತುಂಬಾ ತೊಂದರೆಗೊಳಿಸಿದರು ಮತ್ತು ನನ್ನೊಂದಿಗೆ ಊಟ ಮಾಡಲಿಲ್ಲ. ಶಾಹಿದ್ ಅಫ್ರಿದಿ ನನಗೆ ಮತಾಂತರಗೊಳ್ಳಲು ಹೇಳಿದ ಪ್ರಮುಖ ವ್ಯಕ್ತಿ, ಮತ್ತು ಅವರು ಹಲವು ಬಾರಿ ಹಾಗೆ ಮಾಡಿದರು. ಇಂಜಮಾಮ್-ಉಲ್-ಹಕ್ ಎಂದಿಗೂ ಆ ರೀತಿ ಮಾತನಾಡುತ್ತಿರಲಿಲ್ಲ,” ಎಂದು ಕನೇರಿಯಾ ಖಾಸಗಿ ಚಾನೆಲ್ ನಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದರು

