ಮಂಗಳೂರು: ಕರ್ನಾಟಕ ಗಮಕ ಕಲಾ ಪರಿಷತ್ತು. ಬೆಂಗಳೂರು, (ರಿ),ಕರ್ನಾಟಕ ಗಮಕ ಕಲಾ ಪರಿಷತ್ತು ದ.ಕ.ಜಿಲ್ಲೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು,ಪುತ್ತೂರು ತಾಲೂಕು ಘಟಕದ ವತಿಯಿಂದ ದ.ಕ ಜಿಲ್ಲಾ10 ನೇ ಗಮಕ ಸಮ್ಮೇಳನ ದಿನಾಂಕ 17 ಮತ್ತು18ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯ ಶ್ರೀ ಮುಳಿಯ ತಿಮ್ಮಪ್ಪಯ್ಯ ಸಭಾಂಗಣದಲ್ಲಿ ಶ್ರೀ ಮುಳಿಯ ಶಂಕರ ಭಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ದ.ಕ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗಮಕ ಕಲಾ ಸಮ್ಮೇಳನದ ಅಧ್ಯಕ್ಷರಾದ ಹಿರಿಯ ವಿದ್ವಾಂಸ ಶ್ರೀ ಮುಳಿಯ ಶಂಕರ ಭಟ್ಟರು ಪ್ರವಚನಗಾರರಾಗಿ, ಸಾಹಿತಿಗಳಾಗಿ, ಅರ್ಥಧಾರಿಗಳಾಗಿ
ಕವಿ ಹೃದಯದ ಒಳಹೊಕ್ಕು ಹೃದ್ಯವಾಗಿ ಪ್ರವಚನ ಮಾಡುವ ಶ್ರೀಯುತರು, ಸಾಹಿತ್ಯದ ಎಲ್ಲ ಪ್ರಕಾರಗಳಿಗೆ ತನ್ನ ಕೊಡುಗೆಗಳನ್ನು ನೀಡಿದ ಪ್ರತಿಭಾ ಸಂಪನ್ನರು,

ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮುಳಿಯದವರಾದ ಶ್ರೀ ಶಂಕರ ಭಟ್ಟರು ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಇವುಗಳ ಅಧ್ಯಕ್ಷತೆಯ ಗೌರವಕ್ಕೆ ಭಾಜನರಾದವರು.ಪ್ರವಚನಗಾರರಾಗಿ ಪ್ರಸಿದ್ಧರಾದ ಶ್ರೀ ಶಂಕರಭಟ್ಟರ ಅಧ್ಯಕ್ಷತೆಯಲ್ಲಿ ಜರಗುವ ಈ ಸಮ್ಮೇಳನ ಇದೇ ಅಕ್ಟೋಬರ್ 17 ರಂದು ಅಪರಾಹ್ನ ಗಂಟೆ 2:30ಕ್ಕೆ ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ ಅವರ ದಿವ್ಯ ಸಾನ್ನಿಧ್ಯದಲ್ಲಿ ಡಾ. ಹರಿಕೃಷ್ಣ ಪುನರೂರು ಅವರಿಂದ ಉದ್ಘಾಟನೆಗೊಳ್ಳಲಿದೆ. ದ್ವಾರಕಾ ಸಮೂಹಸಂಸ್ಥೆಗಳ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಭಟ್ ಅವರು ನೆನಪಿನ ಸಂಚಿಕೆ ‘ಗಮಕ ಗಂಗಾಧರ’ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಶ್ರೀ ಯಜ್ಞೇಶ ಆಚಾರ್ಯ, ಶ್ರೀ ಸಂಜೀವ ಮಠಂದೂರು, ಶ್ರೀ ಪಂಜಿಗುಡ್ಡೆ ಈಶ್ವರ ಭಟ್, ಶ್ರೀ ಯು. ಪೂವಪ್ಪ ಭಾಗವಹಿಸಲಿದ್ದಾರೆ.

ಗಮಕದಲ್ಲಿ ನವರಸ, ಕಾವ್ಯ ಗಾಯನ, ಗಮಕ ಸಂವಾದ ಗೋಷ್ಠಿ, ಗಮಕ ವೈಭವ, ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ ಪ್ರಧಾನ, ಬೂಕ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ದೀಪಾ ಬಾಸ್ತಿಯವರಿಗೆ ಗೌರವಾರ್ಪಣೆಯೊಂದಿಗೆ ಈ ಸಮ್ಮೇಳನ ತಾ. 18 ರಂದು ಅಪರಾಹ್ನ ಸಮಾರೋಪಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಡಾ. ತಾಳ್ತಜೆ ವಸಂತ ಕುಮಾರ್ ಸಮಾರೋಪ ಭಾಷಣ ಮಾಡುತ್ತಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಕುಂತಳಾ ಶೆಟ್ಟಿ, ಶ್ರೀ ಅರುಣ್ ಕುಮಾರ್ ಪುತ್ತಿಲ, ಭಾಗವಹಿಸಲಿದ್ದಾರೆ. ಡಾ. ವರದರಾಜ ಚಂದ್ರಗಿರಿ, ಶ್ರೀ ಲಕ್ಷ್ಮೀಕಾಂತ ಆಚಾರ್ಯ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹರಿಕ್ರಷ್ಣ ಪುನರೂರು, ಡಾ.ಮಹಾಲಿಂಗ ಭಟ್, ವೇದವ್ಯಾಸ ರಾಮಕುಂಜ, ಭವಾನಿ ಶಂಕರ ಶೆಟ್ಟಿ ಉಪಸ್ಥಿತರಿದ್ದರು.


