ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಜೈ ಭಾರತಿ ತರುಣ ವೃಂದ ( ರಿ) ಉರ್ವ ಹೊಯ್ಗೆಬೈಲ್ ಇದರ 60ನೇ ವರ್ಷದ ವಜ್ರ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮ ಹಾಗೂ ಲಾಂಛನ ಅನಾವರಣವನ್ನು ರಿಯಾ ಫೌಂಡೇಶನ್ ವಿಶೇಷ ಚೇತನ ಮಕ್ಕಳ ವಸತಿ ಕೇಂದ್ರ. ಕುಲಶೇಖರ ಕೋಟಿಪುರ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಖ್ಯಾತ ವಕೀಲರಾದ ರಾಘವೇಂದ್ರ ರಾವ್ ಉದ್ಘಾಟಿಸಿದರು ನಂತರ ಮಾತನಾಡಿ ಅವರು ಜೈ ಭಾರತಿ ತರುಣ ವೃಂದದವರು ದಿನಸಿ ಸಾಮಾಗ್ರಿಗಳನ್ನು ಕೊಟ್ಟು ಆ ಮಕ್ಕಳ ಜೊತೆ ಸೇರಿ ಸಹ ಭೋಜನವನ್ನು ಮಾಡಿರುವುದನ್ನು ಶ್ಲಾಘಿಸಿದರು. ಹಾಗೂ ಅವರ ವೈಯಕ್ತಿಕ ಜೀವನವನ್ನು ನೆನಪಿಸಿಕೊಂಡು ಅವರ ಮಕ್ಕಳ ಹುಟ್ಟುಹಬ್ಬವನ್ನು ಪ್ರತಿವರ್ಷ ಹಲವಾರು ಆಶ್ರಮದೊಂದಿಗೆ ಸೇರಿ ಆಚರಿಸುವುದನ್ನು ನೆನಪಿಸಿಕೊಂಡರು ಇಂತಹ ಸಮಾಜಮುಖಿ ಕೆಲಸಗಳನ್ನು ಇನ್ನೂ ಕೂಡ ಮಾಡಲಿ ಎಂದು ಹಾರೈಸಿದರು.


ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ರೈ ಮಾತನಾಡಿ ನೀವು ಮಾಡಿದ ಈ ಕಾರ್ಯಕ್ರಮ ಆ ದೇವರು ನಿಮಗೆಲ್ಲರಿಗೂ ಒಳ್ಳೆಯದನ್ನು ಮಾಡಲಿ ನಿಮ್ಮ ಸಂಸ್ಥೆ ಇನ್ನೂ ಕೂಡ ಇಂಥ ಕೆಲಸಗಳನ್ನು ಮುಂದುವರಿಸಲಿ ಇಂಥ ಈ ಪುಣ್ಯ ಕೆಲಸಗಳು ಬೇರೆ ಸಂಸ್ಥೆಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.



ವೇದಿಕೆಯಲ್ಲಿ ಅಧ್ಯಕ್ಷರಾದ ವಿಕ್ರಂ ,ಪ್ರಧಾನ ಕಾರ್ಯದರ್ಶಿ ಜಿತೇಂದ್ರ ದೇವಾಡಿಗ, ಗೌರವಾಧ್ಯಕ್ಷರಾದ ಕೇಶವ ಕರ್ಕೇರ ಹಾಗೂ ರಿಯಾ ಫೌಂಡೇಶನ್ ವಾರ್ಡನ್ ರಶ್ಮಿತಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ಶೆಟ್ಟಿ ಕೊಡಿಯಲ್ ಬೈಲ್ ನಿರೂಪಿಸಿದರು. ಸಂಘದ ಪ್ರಸ್ತಾವಿಕ ವರದಿಯನ್ನು ಸತೀಶ್ ಪೂಜಾರಿ ಅಶೋಕನಗರ ವಾಚಿಸಿದರು ಹಾಗೂ ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


