ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ನೂತನ ಶಾಖೆ “ದಿ ಬೋಟ್ ಮ್ಯಾನ್ ಹಬ್” ರೆಸ್ಟೋರೆಂಟ್ ಇತ್ತಿಚೆಗೆ ಲೋಕಾರ್ಪಣೆಗೊಂಡಿತ್ತು.

ರೆಸ್ಟೋರೆಂಟ್ ನ ಉದ್ಘಾಟನೆಯನ್ನು ಉದ್ಯಮಿ ಡಾ.ರೊನಾಲ್ಡ್ ಕೊಲಾಸೋ, ಉದ್ಯಮಿ ಹುಸೈನ್ ಅಬ್ಬಾಸ್, ಭಾರತೀಯ ಗಾಯಕಿ ಗೋವಾದ ಖ್ಯಾತಿ ನಟಿ ರೀಟಾ ರೋಸ್ ರವರು ಮಾಡಿದರು. ಯುಎಇಯ ತುಳು ಕನ್ನಡ ಸಂಘಟಕರಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಾಚಿ ಶೆಟ್ಟಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪ್ರವೀಣ್ ಕುಮಾರ್ ಶೆಟ್ಟಿಯವರ ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು.

ಉದ್ಘಾಟನಾ ಸಮಾರಂಭದ ಮುಂಚೆ ದುಬೈ ಸೇಂಟ್ ಮೇರಿ ಕ್ಯಾಥೋಲಿಕ್ ಚರ್ಚ್ನ ಗುರುಗಳಾದ ಶ್ರೀ ಫಾ.ಮೈಕೆಲ್ ಕಾರ್ಡೋಜ್ ಮತ್ತು BAPS ಹಿಂದೂ ಮಂದಿರ ಅಬುಧಾಬಿಯ ಸ್ವಾಮೀಜಿ ಶ್ರೀ ಬಹುಶ್ರುತದಾಸ್ ಜಿ ರೆಸ್ಟೋರೆಂಟ್ ಗೆ ಶುಭವನ್ನು ಹಾರೈಸಿದರು.ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಅತಿಥಿ ಅಬಾಗ್ಯತರನ್ನು ಸ್ವಾಗತಿಸಿ ವಂದಿಸಿದರು.

“ಬೋಟ್ ಮ್ಯಾನ್ ಹಬ್”ರೆಸ್ಟೋರೆಂಟ್ ಮಂಗಳೂರು,ಗೋವಾ ಮತ್ತು ಮಹಾರಾಷ್ಟ್ರದ ಮಾಲ್ವನ್ ನಗರದ ಶ್ರೀಮಂತ ಕರಾವಳಿ ಸಂಪ್ರದಾಯಗಳಿಂದ ಪ್ರೇರಿತವಾಗಲಿದೆ.ಈ ಮೂರು ಪ್ರಾದೇಶಿಕ ಪಾಕ ಪದ್ದತ್ತಿಗಳ ಒಂದು ಭಕ್ಷ್ಯ ಪಟ್ಟಿ ಮತ್ಸ ಪ್ರಿಯರ ಸ್ವಾದಿಷ್ಟತೆಯ ಖಾದ್ಯಗಳನ್ನು ಆಸ್ವಾದಿಸುವರನ್ನು ಒಟ್ಟುಗೂಡಿಸಿಲಿದೆ.ಊರಿನ ವಾತಾವರಣ ಸೃಷ್ಟಿಸಿ ಸಂಪ್ರದಾಯ ಭೋಜನಗಳೊಂದಿಗೆ ಅಂತಾರಾಷ್ಟ್ರೀಯ ಶೈಲಿಯಲ್ಲಿ ಸೇವೆ ನಿರ್ವಹಿಸಲಿದೆ.ಪ್ರತಿದಿನ ಸಂಜೆ ಲೈವ್ ಡ್ಯೂಯೆಟ್ ಪ್ರದರ್ಶನಗಳು ಒಂದು ಭಾವಪೂರ್ಣ ಕಡಲತೀರದ ವಾತಾವರಣವನ್ನು ಹೊಂದಿರುತ್ತದೆ.ಗೋವಾ ಮೂಲತಃ ಪ್ರಶಸ್ತಿ ವಿಜೇತ ಪ್ರಸಿದ್ಧ ಬಾಣಸಿಗ ಚೆಪ್ ಸರೀತಾ ಚೌವ್ಹಾಣ್ ಇವರ ಸಾರಥ್ಯದಲ್ಲಿ ಈ ರೆಸ್ಟೋರೆಂಟ್ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ.ವಿವಿಧ ಬಗೆಯ ಮತ್ಸ್ಯಗಳ ಸವಿಯಾದ ಖಾದ್ಯಗಳ ಸ್ವಾದಿಷ್ಟ ರುಚಿಯೇ ಇಲ್ಲಿ ಗ್ರಾಹಕರನ್ನು ಸೆಳೆಯುವ ಕೇಂದ್ರವಾಗಲಿದೆ.
ದುಬೈ ನಗರಕ್ಕೆ ಬರುವ ಪ್ರವಾಸಿಗರಿಗೆ ಉತ್ತಮ ಶುಚಿ ರುಚಿಯ ಕೇಂದ್ರವಾಗಲಿದೆ ಈ ರೆಸ್ಟೋರೆಂಟ್.ಹೆಚ್ಚಿನ ಮಾಹಿತಿಗಾಗಿ ಹಾಗೂ ಕಾಯ್ದಿರಿಸುವಿಕೆಗಾಗಿ +971554253900 ಈ ನಂಬರನ್ನು ಸಂಪರ್ಕಿಸಬಹುದು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

