ಮಂಗಳೂರು : 2024-25 ನೇ ಸಾಲಿನ ಆಡಿಟ್ ವರ್ಗೀಕರಣದಲ್ಲಿ. ‘A’ ದರ್ಜೆಯನ್ನು ಪಡೆದು, ಸಾಲ ವಸೂಲಾತಿಯಲ್ಲಿ ಕೂಡ 98.5 ಶೇಕಡ ಪ್ರಗತಿಯನ್ನು ಕಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ. ಇದರ ಸಾಧನೆಯನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ” ವಿಶಿಷ್ಟ ಸಾಧನಾ ಪ್ರಶಸ್ತಿ” ನೀಡಿ ಗೌರವಿಸಿದರು.

ಸೊಸೈಟಿ ಉತ್ತಮ ಸಾಧನೆ ಮಾಡಲು ಮಾರ್ಗದರ್ಶನ ನೀಡಿದ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ ಎನ್. ರಾಜೇಂದ್ರ ಕುಮಾರ್, ನನ್ನ ಮಾರ್ಗದರ್ಶಕರಾದ ಮಾಜಿ ಸಚಿವರಾದ ಶ್ರೀ ಕೆ ಅಭಯ್ ಚಂದ್ರ ಜೈನ್ ಮತ್ತು ಆತ್ಮೀಯರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ಎಂ ರೈ ಅವರಿಗೆ ಆಭಾರಿಯಾಗಿದ್ದೇನೆ.

ಸೊಸೈಟಿ ಈ ಮಟ್ಟಕ್ಕೇರಲು ಸಹಕಾರ ನೀಡುತ್ತಿರುವ ಎಲ್ಲಾ ನಿರ್ದೇಶಕರಿಗೆ, ಇಲಾಖೆಯ ಅಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಹಾಗೂ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸತತ ಎರಡನೇ ಅವಧಿಗೆ ಈ ಪ್ರಶಸ್ತಿ ಲಭಿಸಿರುವುದು ಹರ್ಷ ತಂದಿದೆ ಎಂದು ಸೊಸೈಟಿಯ ಅಧ್ಯಕರಾದ ಎಚ್ .ವಸಂತ್ ಬೆರ್ನಾರ್ಡ್ ಹೇಳಿದರು

